ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ಹರ ಹರ ಮಹದೇವ ಇದೀಗ ತನ್ನಎಂಭತ್ತು ಕಂತುಗಳನ್ನು ಪೂರೈಸಿದ್ದು ಧಾರಾವಾಹಿಯು ಇದೀಗ ಪ್ರಮುಖಘಟ್ಟವೊಂದನ್ನುತಲುಪಿದೆ.
ಸತಿಯದಹನದ ನಂತರ ವಿರಾಗಿಯಾಗಿದ್ದ ಮಹಾದೇವನನ್ನು ಪ್ರೇಮ ಪಾಶದಲ್ಲಿ ಬಂಧಿಸಿದ್ದಾಳೆ ಆದಿಶಕ್ತಿಯ ಮತ್ತೊಂದುಅವತಾರ ಪಾರ್ವತಿ.ಮಹಾದೇವ ಮತ್ತು ಪಾರ್ವತಿಯ ವಿವಾಹದ ವೈಭವೋಪೇತ ವಿಶೇಷ ಸಂಚಿಕೆಗಳು ಇದೇ ಸೋಮವಾರದಿಂದಆರಂಭವಾಗಿದ್ದು ಶಿವ ಪಾರ್ವತಿಯ ಮದುವೆಯಎಲ್ಲ ಶಾಸ್ತ್ರ ಸಂಪ್ರದಾಯಗಳನ್ನು ಮತ್ತು ವಿಧಿ ವಿದಾನಗಳನ್ನು ಧಾರಾವಾಹಿಯಲ್ಲಿಕಾಣಬಹುದಾಗಿದೆ.
ಸೋಮವಾರಅರಂಭವಾಗುವ ಶಿವ ಪಾರ್ವತಿಯರ ಮದುವೆಯ ವೈಭವದ ಕಂತುಗಳು ವಾರವಿಡೀ ಮದುವೆಯ ವಿಧ ವಿಧ ಶಾಸ್ತ್ರಗಳಾದ - ಅರಿಶಿನ ಶಾಸ್ತ್ರ ,ತಿಲಕ ಶಾಸ್ತ್ರ , ವರಯಾತ್ರೆ , ನಾಂದಿ ಶಾಸ್ತ್ರ, ಮಾಂಗಲ್ಯಧಾರಣ ಶಾಸ್ತ್ರ, ಸಪ್ತಪದಿ ಶಾಸ್ತ್ರ , ಉಂಗುರ ಶಾಸ್ತ್ರ ಮತ್ತು ವಿದಾಯ ಹೀಗೆ ಮಹಾದೇವ ಪಾರ್ವತಿಯ ಮದುವೆಯ ಸಂಪೂರ್ಣಚಿತ್ರಣವನ್ನು ಸ್ಟಾರ್ ಸುವರ್ಣ ವಾಹಿನಿ ತನ್ನ ಹರ ಹರ ಮಹಾದೇವಧಾರಾವಾಹಿಯಲ್ಲಿ ವೀಕ್ಷಕರಿಗೆ ನೀಡಲು ಸಜ್ಜಾಗಿದೆ.
ಮಾಂಗಲ್ಯಧಾರಣೆಯಕಂತು ದಿನಾಂಕ ನವೆಂಬರ್ ೧೮ ರಂದು ಪ್ರಸಾರವಾಗಲಿದೆ.ಈಎಲ್ಲಾ ದೃಶ್ಯಾವಳಿಗಳು ನೋಡುಗರಿಗೆರೋಮಾಂಚನಉಂಟು ಮಾಡಲಿದ್ದು, ಸ್ವತಃತಾವೆ ಶಿವ ಪಾರ್ವತಿಯರ ಮದುವೆಯಲ್ಲಿ ಪಾಲ್ಗೊಂಡಅದ್ಭುತಅನುಭವ ನೀಡಲಿದೆ.
ಇನ್ನು ಮದುವೆಯ ನಂತರದ ಕಂತುಗಳಲ್ಲಿ ಪಾರ್ವತಿ ಮತ್ತೆ ಬೆಸ್ತಳಾಗಿ ಹುಟ್ಟುವುದು , ಭದ್ರಕಾಳಿಯ ಅವತಾರ ಹೀಗೆ ನಾನ ಕತೆಗಳು ತೆರೆದುಕೊಳ್ಳುತ್ತದೆ . ಪಾರ್ವತಿ ಏಕೆ ಭದ್ರಕಾಳಿಯಾಗುತ್ತಾಳೆ.ಇದರ ಹಿಂದಿನ ಮಹಿಮೆಯೇನು?ಎಂಬುದು ಹರ ಹರ ಮಹಾದೇವ ಮುಂಬರುವ ಸಂಚಿಕೆಯಲ್ಲಿ ತಿಳಿಯುತ್ತದೆ.
ಪಾರ್ವತಿ ವಿವಾಹ ಮಹೋತ್ಸವಸೋಮವಾರದಿಂದ ಶುಕ್ರವಾರದವರೆಗೆರಾತ್ರಿ ೭.೩೦ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.